ಲಕ್ಷ್ಮಿಯ ಅನುಗ್ರಹ ಪಡೆಯಲು

ನಿಮ್ಮ ಜೀವನದಿಂದ ವಿಷಾದತೆಯನ್ನು ಓಡಿಸಿಯೇ ಬಿಡುವೆನೆಂದು ಧ್ರಡ ನಿರ್ಧಾರ ಮಾಡಿ ಹಾಗು ದಾರಿದ್ರ್ಯವನ್ನು ಓಡಿಸಬೇಕೆಂದರೆ ಅನಗತ್ಯ ವೆಚ್ಚಗಳ ಮೇಲೆ ಕಡಿವಾಣ ಹಾಕಿರಿ, ಸಾಲ ಮಾಡಿ ವಾಹನ ಅಥವಾ ಮನೆಯನ್ನು ಖರೀದಿಸಬೇಡಿ. ಲಕ್ಷ್ಮಿಯ ಅನುಗ್ರಹ ಹೆಚ್ಚಾಗಬೇಕೆಂದರೆ ಓಂ ಅಚ್ಯುತಾಯ ನಮಃ ಎಂಬ ಮಂತ್ರವನ್ನು ಕೆಲವು ದಿನಗಳವರೆಗೆ ೧೧ ಮಾಲೆಗಳಂತೆ ಜಪಿಸಿರಿ ಆಮೇಲೆ ಗುರುವಾರದಂದು ೨೧ ಸಾರಿ ಜಪಿಸಿ, ಹಾಗು ಗುರುವಾರದಿಂದ ಮುಂದಿನ ಗುರುವಾರದವರೆಗೆ ೧೧ ಮಾಲೆಗಳಂತೆ ಜಪಿಸಿರಿ, ಹೀಗೆ ಗುರುವಾರ ಮತ್ತು ಗುರುವಾರಗಳ ತನಕ ಅಂದರೆ ವಾರ ಹಾಗು ವಾರಗಳವರೆಗೆ. ಮಂತ್ರವು ಕೆಲವೇ ದಿನಗಳಲ್ಲಿ ಸಿದ್ಧವಾಗುವುದು, ಆನಂತರ ಒಂದು ಲೋಟದಲ್ಲಿ ನೀರನ್ನು ಇಟ್ಟುಕೊಂಡು ೨೧ ಬಾರಿ ಜಪಿಸಿ ನೀರನ್ನು ನೋಡಿ ಕುಡಿಯಿರಿ
ಓಂ ಅಚ್ಯುತಾಯ ನಮಃ ಎಂದರೆ ಯಾರ ಪದಕ್ಕೆ ಚ್ಯುತಿಯುಂಟಾಗುವದಿಲ್ಲವೋ, ಇಂದ್ರನ ಪದವಿ ಕೂಡ ಚ್ಯುತಿಯಾಗುತ್ತದೆ, ಭ್ರಹ್ಮನ ಪದವಿ ಕೂಡ ಚ್ಯುತಿಯಾಗುತ್ತದೆ, ಆದರೂ ಯಾರು ತಮ್ಮ ಪದವಿಯಿಂದ ಚ್ಯುತಿಯಾಗುವದಿಲ್ಲವೋ, ತಮ್ಮ ಸ್ವಭಾವದಿಂದ, ತಮ್ಮಿಂದ ತಮಗೆ ಚ್ಯುತಿಯಾಗದಂತೆ ನೋಡಿಕೊಳ್ಳುವ ಪರಮೇಶ್ವರನಾದ ಅಚ್ಯುತನಿಗೆ ನಾನು ನಮಸ್ಕರಿಸುತ್ತೇನೆ ಅಚ್ಯುತಂ ಕೇಶವಂ ನಾರಾಯಣಂ . . . .

ಕಾಮೆಂಟ್‌ಗಳಿಲ್ಲ: