- ಸ್ನಾನ ಮಾಡುವಾಗ ನೀರಿನಲ್ಲಿ ಗೋಝರಣ ಸೇರಿಸಿ ಸ್ನಾನ ಮಾಡುವದರಿಂದ ರೋಗಗಳು ನಾಶವಾಗುವವು, ಪಾಪಗಳು ನಷ್ಟವಾಗುವವು, ಪಂಚಗವ್ಯದಿಂದ ಸ್ನಾನ ಮಾಡುವದರಿಂದ ಪಾಪನಾಶಿನಿ ಶಕ್ತಿ ಸಿಗುವುದು. ಬಿಲ್ವ ಪತ್ರೆ ಗಿಡದ ಎಲೆಯಿಂದ ಸ್ನಾನ ಮಾಡಿರಿ, ಅಭ್ಯಂಗ ಸ್ನಾನ ಮಾಡಿರಿ, ಮೊಸರಿನಿಂದ ಸ್ನಾನ ಮಾಡುವದರಿಂದ ಲಕ್ಷ್ಮಿ ಪ್ರಾಪ್ತಿಯಾಗುತ್ತದೆ. . . ಆದರೆ ಇವೆಲ್ಲ ಶರೀರದ ಸ್ವಾಸ್ಥ್ಯಕ್ಕಾಗಿ ಹಾಗು ಅಂತರಾತ್ಮನ ಬಳಿ ಬರಲು ಇರುವವು
- ಕಾರ್ತಿಕ ಮಾಸದಲ್ಲಿ ಸೂರ್ಯೋದಯಕ್ಕಿಂತ ಮುಂಚೆ ಸ್ನಾನ ಮಾಡುವದಕ್ಕೆ ತುಂಬಾ ಮಹತ್ವವಿದೆ ಹಾಗು ಈ ಸ್ನಾನ ತೀರ್ಥಸ್ಥಾನದಲ್ಲಿ ಮಾಡುವ ಸ್ನಾನಕ್ಕೆ ಸಮಾನವಾಗಿದೆ, ಒಂದು ವೇಳೆ ಸಂಪೂರ್ಣವಾಗಿ ಕಾರ್ತಿಕ ಮಾಸದಲ್ಲಿ ಸ್ನಾನ ಮಾಡಲಾಗದಿದ್ದಲ್ಲಿ ಕಾರ್ತಿಕ ಮಾಸದ ಕೊನೆಯ ದಿನಗಳಾದ ತ್ರಯೋದಶಿ, ಚತುರ್ದಶಿ ಹಾಗು ಹುಣ್ಣಿಮೆಯಂದು ಸ್ನಾನ ಮಾಡಿದರೆ ಈ ಮಾಸದ ಪುಣ್ಯ ಸ್ನಾನದ ಫಲ ಸಿಗುತ್ತದೆ
ಸ್ನಾನ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ